ಓಂ ಶ್ರೀ ಸ್ವಸ್ತಿಕ್ ![]() ![]() ಹಿರಿಯ ನಿರ್ದೇಶಕ ಪುಟಾಣೆ ರಾಮರಾವ್ ‘ಓಂ ಶ್ರೀ ಸ್ವಸ್ತಿಕ್’ ಹೆಸರುಗಳನ್ನು ಚಿಹ್ಮೆಗಳೊಂದಿಗೆ ಹೆಸರಿನಲ್ಲಿ ಗುರುತಿಸಿಕೊಂಡು ನಿರ್ಮಾಣ ಮಾಡಿದ್ದಾರೆ. ತ್ರಿಸಂಗಮ ಹಂಗಾಮವೆಂದು ಉಪಶೀರ್ಷಿಕೆಯಾಗಿ ಹೇಳಿಕೊಂಡಿದೆ. ಹೊಸಕೋಟೆ, ರಾಮೋಹಳ್ಳಿ ಕಡೆಗಳಲ್ಲಿ ಶೇಕಡ 75ರಷ್ಟು ಚಿತ್ರೀಕರಣ ಮುಗಿಸಿ, ಎರಡು ಹಾಡುಗಳು, ಸಾಹಸ ಮತ್ತು ಮಾತಿನ ಭಾಗದ ಕೆಲಸವನ್ನು ಉಳಿಸಿಕೊಂಡಿದೆ. ಅಡಿಬರಹದಲ್ಲಿ ಹೇಳಿರುವಂತೆ ಕಮರ್ಷಿಯಲ್, ಕಲಾತ್ಮಕ ಹಾಗೂ ಇವರೆಡು ಮಿಶ್ರಣಹೊಂದಿರುವ ಮೂರು ಕತೆಗಳು ಬೇರೆ ಬೇರೆ ತರದಲ್ಲಿ ಹೊಸತನದಿಂದ ಕೂಡಿದ್ದು, ನವರಸಗಳಿಂದ ತುಂಬಿಕೊಂಡಿದೆ. ಪುಣಾಣೆ ಫಿಲಿಂ ಇನ್ಸಿಟ್ಯೂಟ್ದಲ್ಲಿ ತರಭೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳು ನಟಿಸಿದ್ದು, ಅವರಿಂದಲೇ ಡಬ್ಬಿಂಗ್ ಮಾಡಿಸಿರುವುದು ವಿಶೇಷ. ನಾಯಕನಾಗಿ ಸಂತೋಷ್ಬಾರ್ಕಿ, ನಾಯಕಿ ರಂಜಿತ. ಉಳಿದಂತೆ ಯತೀಶ್, ನಿತಿನ್, ರಾಹುಲ್, ಅಜಯ್, ಸ್ನೇಹ, ವಿನಯ್, ಶೃತಿಶೆಟ್ಟಿ ಮತ್ತು ಮಾಸ್ಟರ್ ಚಿರಂಜೀವಿ ನಟಿಸಿದ್ದಾರೆ. ತಮ್ಮೇನಹಳ್ಳಿದಾಸ್-ನಾಗಮುಖ ಸಾಹಿತ್ಯದ ನಾಲ್ಕು ಹಾಡುಗಳಿಗೆ ಲೋಕಿ ಸಂಗೀತವಿದೆ. ರಚನೆ,ಚಿತ್ರಕಥೆ, ಸಂಭಾಷಣೆ ಭೋಗೇಶ್.ಎಸ್.ಕಾರಟಕಿ, ಛಾಯಾಗ್ರಹಣ ಧನರಾಜ್ಚೌಹಾಣ್, ಸಂಕಲನ ಸುಮಂತ್, ಹಿನ್ನಲೆ ಶಬ್ದ ಸತೀಶ್ಬಾಬು ಅವರದಾಗಿದೆ.ತಂಡಕ್ಕೆ ಶುಭಹಾರೈಸಲು ಆಗಮಿಸಿದ್ದ ರಂಗಿತರಂಗ ಖ್ಯಾತಿಯ ಅರವಿಂದ್ರಾವ್ ಮಾತನಾಡಿ ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬೇಡಿ. ಪ್ರವೃತ್ತಿಯಾಗಿ ಬೆಳಸಿಕೊಳ್ಳುವುದು ಸೂಕ್ತ. ರೀಲ್,ರಿಯಲ್ಗೂ ವ್ಯತ್ಯಾಸವಿದೆ. ಮೊದಲು ನಿಮ್ಮ ನೆಲವನ್ನು ಗಟ್ಟಿ ಮಾಡಿಕೊಳ್ಳಬೇಕು. ಸರಸ್ವತಿ ಎಲ್ಲರನ್ನು ಆರಿಸಿಕೊಳ್ಳುವುದಿಲ್ಲ. ನೀವುಗಳು ಪ್ರತಿಭೆಯನ್ನು ತೋರಿಸಿದಾಗ ಮಾತ್ರ ಉದ್ಯಮದಲ್ಲಿ ಉಳಿಯಲು ಸಾಧ್ಯವೆಂದು ಕಿವಿಮಾತು ಹೇಳಿದರು. ನಿರ್ದೇಶಕರುಗಳಾದ ವಿಶಾಲ್ರಾಜ್ ಮತ್ತು ಹರಿಸಂತೋಷ್ ಭವಿಷ್ಯದ ಕಲಾವಿದರಿಗೆ ಒಳ್ಳೆಯದಾಗಲೆಂದು ಹರಸಿದರು. ಚಿತ್ರಗಳು: ಕೆ.ಎನ್.ನಾಗೇಶ್ಕುಮಾರ್ ಸಿನಿ ಸರ್ಕಲ್.ಇನ್ ನ್ಯೂಸ್ 23/11/19 |
![]() ![]() ![]() |