ತೆರೆಗೆ ಸಿದ್ದ ಕೆಮಿಸ್ಟ್ರೀ ಆಫ್ ಕರಿಯಪ್ಪ
|
![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() ![]() |
ಕರಿಯಪ್ಪನ ಹಾಡು ಪಾಡು ![]() ಸಂಯುಕ್ತ-2 ನಿರ್ಮಾಪಕ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಸ್ಯ ಚಿತ್ರಕ್ಕೆ ಹಣ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಆಡಿಯೋ ಸಿಡಿಯು ಕಲಾವಿದರ ಸಂಘದಲ್ಲಿ ಅನಾವರಣಗೊಂಡಿತು. ನೈಜ ಘಟನೆ ಆಧಾರಿತ ಕತೆಯಾಗಿದೆ ಅಂತ ಸಿನಿಮಾ ಹುಟ್ಟಿದ ಬಗೆಯನ್ನು ನೆನಪು ಮಾಡಿಕೊಂಡ ಡಾ.ಡಿ.ಎಸ್.ಮಂಜುನಾಥ್ ಬೇರೆ ಚಿತ್ರ ನಿರ್ಮಾಣ ಮಾಡುವುದನ್ನು ಪಕ್ಕಕ್ಕೆ ಇಟ್ಟು ಇದನ್ನು ತೆಗೆದುಕೊಳ್ಳಲಾಯಿತು. ವಕೀಲನ ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ಹೇಳಿಕೊಂಡರು. ಬಣ್ಣ ಕಪ್ಪು ಇರುವುದೇ ವರವಾಯಿತು. ಅದಕ್ಕೆ ಕರಿಯಪ್ಪನಾಗಿ ನಟಿಸಲು ಅವಕಾಶ ಸಿಕ್ಕಿತ್ತು. ಹಳ್ಳಿ ಮನೆಯಲ್ಲಿ ನಡೆಯುವುದನ್ನು ಪಾತ್ರವಾಗಿ ತೋರಿಸಲಾಗಿದೆ. ಚಿಕ್ಕ ಸಂಸಾರದಲ್ಲಿ ಅರ್ಥ ಮಾಡಿಕೊಂಡರೆ ಬದುಕು ಸುಲಭ ಎಂಬುದು ಚಿತ್ರದ ತಿರುಳಾಗಿದೆ. ತುಂಬಾ ಜವಬ್ದಾರಿ ಇರುವ ಮಕ್ಕಳು ಹುಟ್ಟಿದರೆ ತಂದೆಯಾದವನ ಕರ್ತವ್ಯ ಏನಾಗುತ್ತದೆ. ಮನೆಗೆ ದೀಪ ಹಚ್ಚ ಬೇಕಾದವಳು, ಬೆಂಕಿ ಹಚ್ಚುವಂತಹ ಸೊಸೆ ಬಂದರೆ ಪರಿಣಾಮ ಎಲ್ಲಿಗೆ ಹೋಗುತ್ತದೆ. ಇದನ್ನು ಪರಿಹರಿಸುವುದು ಹೇಗೆಂದು ಹಾಸ್ಯದ ಮೂಲಕ ತೋರಿಸಲಾಗಿದೆ ಎಂದು ವ್ಯಾಖ್ಯಾನವನ್ನು ತಬಲನಾಣಿ ಕೊಟ್ಟರು. 35 ವರ್ಷದ ಯುವಕನ ಮನಸ್ಸು ಸಮಾಜದ ಮೇಲೆ ಹೇಗೆ ಕಾಣಿಸುತ್ತದೆ. ರ್ಯಾಂಬೋದಲ್ಲಿ ನಾಣಿ ಸರ್ ಅವರೊಂದಿಗೆ ನಟಿಸುವಾಗ ಸೈಕೆಲ್ ಹೊಡೆದಿದ್ದೆ. ಇಂದು ಅವರೊಂದಿಗೆ ನಾಯಕನಾಗಿ ನಟಿಸಿದ್ದು ಖುಷಿ ತಂದಿದೆ ಅಂತಾರೆ ಚಂದನ್. ಅಪ್ಪ ಮಗನ ಸಂಸಾರವನ್ನು ಉಳಿಸಲು ಏನೆಲ್ಲಾ ಕಸರತ್ತು ಮಾಡುತ್ತಾನೆ ಎಂಬುದು ಹೇಳಲಾಗಿದೆ. ಸೊಸೆಯಾಗಿ ಮೊದಲ ಚಿತ್ರದಲ್ಲಿ ಅವಕಾಶ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದರು ನಾಯಕಿ ಸಂಜನಾಆನಂದ್. ‘ಊರ್ವಶಿ ಅವಳು’ ಹಾಡು ವೈರಲ್ ಆಗಿದೆ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ. ಮುಂದಿನ ತಿಂಗಳು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ ಎಂಬುದು ನಿರ್ದೇಶಕ ಕುಮಾರ್ ಮಾತು. ಸಿಂಕ್ ಸೌಂಡ್ದಲ್ಲಿ ಡಬ್ಬಿಂಗ್ ಮಾಡಿರುವುದು ಛಾಲೆಂಜಿಂಗ್ ಆಗಿತ್ತು. ಮೂರು ಹಾಡುಗಳಿಗೆ ಸಾಹಿತ್ಯವನ್ನು ನಿರ್ದೇಶಕರು ರಚಿಸಿದ್ದಾರೆಂದು ಸಂಗೀತ ನಿರ್ದೇಶಕ ಅರವ್ರಿಶಿಕ್ ಹೇಳಿದರು. ಗೆಳಯನ ಚಿತ್ರಕ್ಕೆ ಶುಭ ಹಾರೈಸಲು ಮಿತ್ರ ಆಗಮಿಸಿದ್ದರು. ಸ್ಯಾಂಡಲ್ವುಡ್ನಲ್ಲಿ ಪ್ರಥಮ ಎನ್ನುವಂತೆ 2ಡಿಯಲ್ಲಿ ಸಿದ್ದಪಡಿಸಿರುವ ಅನಿಮೇಶನ್ ಪಾತ್ರಗಳು, ಎರಡು ಹಾಡು ಮತ್ತು ಟ್ರೈಲರ್ನ್ನು ತೋರಿಸಲಾಯಿತು. ಶೋಕಗೀತೆಗೆ ಧ್ವನಿಯಾಗಿರುವ ವಾಣಿಹರಿಕೃಷ್ಣ ಉಪಸ್ತಿತರಿದ್ದರು. ಚಿತ್ರಗಳು: ಕೆ.ಎನ್.ನಾಗೇಶ್ಕುಮಾರ್ ಸಿನಿ ಸರ್ಕಲ್.ಇನ್ ನ್ಯೂಸ್ 23/01/19 |
![]() ![]() ![]() ![]() ![]() ![]() ![]() ![]() ![]() ![]() ![]() ![]() |